tag:blogger.com,1999:blog-3216386420440895108.post5737184888816666356..comments2024-03-12T06:49:58.787-07:00Comments on Bhoomibalaga: ಬರೆದಕ್ಕರವನಳಿಪ ಅಗ್ಗಳಿಕೆ..H S Anupamahttp://www.blogger.com/profile/10884802660234041932noreply@blogger.comBlogger1125tag:blogger.com,1999:blog-3216386420440895108.post-60552337194234890082015-07-20T03:16:25.962-07:002015-07-20T03:16:25.962-07:00ಮಾನ್ಯರೆ,
ಲೇಖನಕ್ಕಾಗಿ ಧನ್ಯವಾದಗಳು. ಕವಿಯು ತನ್ನ ಆಶಯವನ್...ಮಾನ್ಯರೆ, <br />ಲೇಖನಕ್ಕಾಗಿ ಧನ್ಯವಾದಗಳು. ಕವಿಯು ತನ್ನ ಆಶಯವನ್ನು ಕವಿತೆಯಾಗಿಸುವಾಗ ಬಳಸಿರುವ ಭಾಷಾಕ್ರಮ, ಬೌದ್ಧಿಕ ವಾದ ಸರಣಿ, ಭಾವನಾತ್ಮಕ ಪ್ರತಿಭಟನೆ ಮತ್ತು ಸೃಜನಶೀಲತೆಗಿರುವ ಸ್ವಾತಂತ್ರ್ಯದ ಹರಹು ಇವು ನಮ್ಮ ಸಾಮಾಜಿಕ ವಿಷಮತೆಗಳನ್ನು ದೃಷ್ಟಿಕೇಂದ್ರಕ್ಕೆ ತರುವ ಬದಲು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ ಮಿತಿಯ ಪ್ರಶ್ನೆಯಾಗಿ, ಕಾನೂನು ಪ್ರಶ್ನೆಯಾಗಿ ಬಿಂಬಿತವಾಗುತ್ತಿರುವುದರ ರಾಜಕೀಯವನ್ನು ನಿಮ್ಮಥವರು ಅರ್ಥಮಾಡಿಕೊಳ್ಳಬೇಕು. ಭಾರತದ ಸಂವಿಧಾನ ಎಲ್ಲಿಯವರೆಗೆ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾನ್ಯ ಮಾಡುತ್ತದೆಯೋ ಅಲ್ಲಿಯವರೆಗೂ ಅದು ಆಳುವವರ ಕೈಯಲ್ಲಿನ ಅನ್ಯಾಯಯುತ ರಾಜಕೀಯ ಶಕ್ತಿಯ ಕೈಪಿಡಿಯಾಗೇ ಇರುತ್ತದೆ. ಆಸ್ತಿ ವೈಯಕ್ತಿಕ ಹಕ್ಕಾಗದೆ ಸಾಮಾಜಿಕ ಆಸ್ತಿಯಾಗಿರಬೇಕೆಂಬ ಅಂಬೇಡ್ಕರ್ ನಿಲುವನ್ನು ಮಾನ್ಯ ಮಾಡದೆ ಸಂವಿಧಾನದ ಮೂಲ ಚೌಕಟ್ಟನ್ನು ಬದಲಿಸಲಾಗದು ಎಂಬ ಕಾನೂನು ನ್ಯಾಯದ ನೆರಳಿನಲ್ಲಿ ಅವರ ಹೆಸರನ್ನು ಮಾತ್ರ ಸಂವಿಧಾನದ ಪಾವಿತ್ರ್ಯಕ್ಕಾಗಿ, ಸಾಮಾಜಿಕ ನ್ಯಾಯಪರವಾದ ತಿದ್ದುಪಡಿಯ ವಿರುದ್ಧದ ರಕ್ಷೆಗಾಗಿ ಬಳಸಿಕೊಳ್ಳುವ ಆಳುವವರ್ಗಗಳ ರಾಜಕೀಯ ನಿಮ್ಮಂಥವರಿಗೆ ಆರ್ಥವಾಗಬೇಕು. ಗಾಂಧಿ ಪ್ರಣೀತ ಆಸ್ತಿಯ ಧರ್ಮದರ್ಶಿತ್ವ ಮಾರ್ಕ್ಸ್ ಪ್ರತಿಪಾದಿಸಿದ, ಅಂಬೇಡ್ಕರ್ ನಂಬಿದ ಸಾಮಾಜಿಕ ಆಸ್ತಿ ಪ್ರತಿಪಾದನೆಯನ್ನು ನೇರವಾಗಿ ತಿರಸ್ಕರಿಸುತ್ತದೆ ಎಂಬುದೂ ನಿಮ್ಮಂಥವರಿಗೆ ಅರ್ಥವಾಗಬೇಕು. ಅನ್ಯಾಯಯುತ ಸಮಾಜದ ಚೌಕಟ್ಟಿನೊಳಗಿಸ್ಸು, ಸಮಾಜವಾದೀ ನ್ಯಾಯವನ್ನು ಒಪ್ಪದ ಗಾಂಧಿ ವ್ಯಕ್ತಿತ್ವದ ಪಾವಿತ್ರತೆಯನ್ನು ಸಾಂವಿಧಾನಿಕವಾಗೇ ರಕ್ಷಿಸಲು ಸರ್ಕಾರ ಏಕೆ ಮುಂದಾಗುತ್ತದೆ ಎಂಬ ಪ್ರಶ್ನೆಯೂ ನಿಮ್ಮಂಥವರನ್ನು ಕಾಡಬೇಕು. ಕವಿಯು ಅನ್ಯಾಯಯುತ ಸಮಾಜದೊಳಗೇ ಕಡಿಮೆ ಅನ್ಯಾಯದ ಸುಧಾರಿತ ನ್ಯಾಯವನ್ನು ಆಗ್ರಹಿಸುವ ಗಾಂಧಿಯ ಆದರ್ಶಗಳಿಗಾಗಿರುವ ಅನ್ಯಾಯವನ್ನು ಪ್ರತಿಭಟಿಸಿದರೆ ಆಳುವ ವರ್ಗಗಳಿಗಾಗುವ ತೊಂದರೆಯೇನು? ಒಂದು:ಗಾಂಧಿ, ಅಂಬೇಡ್ಕರ್, ವಿವೇಕಾನಂದ ಮೊದಲಾದವರನ್ನು ಆಳುವ ವರ್ಗಗಳು, ನ್ಯಾಯ ಬೇಡುವ ಜನಸಮುದಾಯದ ವಿರುದ್ಧ 'ಫೈರ್ವಾಲ್' ಆಗಿ ಬಳಸುತ್ತಾ ಬಂದಿರುವುದರಿಂದ, ಸತ್ಯ, ನೀತಿ, ನ್ಯಾಯ, ನಿಸ್ಪೃಹತೆ ಮುಂತಾದ ನೈತಿಕ ಮೌಲ್ಯಗಳಾಗಿಸಿ ಪ್ರಶ್ನೆಗಳನ್ನೆತ್ತಿದರೂ ಅವು ಜನಸಮುದಾಯದ ರಾಜಕೀಯ ಪ್ರಶ್ನೆಗಳಾಗಿ ಮಾರ್ಪಡುವ 'ಅಪಾಯ' ಇರುವುದರಿಂದ ಗಾಂಧಿಯಂಥವರ ಇಮೇಜನ್ನು ಆಳುವ ವರ್ಗದ ಸರ್ಕಾರಗಳು ಕಾಪಾಡಿಕೊಳ್ಳುವ ಅಗತ್ಯ ಬೀಳುತ್ತದೆ. ಆಳುವ ವರ್ಗವೇ ಒಡೆದ ಗಾಂಧಿಯ ಒಡಕು ಕನ್ನಡಿಯಲ್ಲಿ ಕಾಣುವ ಗಾಂಧಿಯ 'ಒಡಕು ಬಿಂಬ' ವಾಸ್ತವವಾಗಿ ಆಳುವ ವರ್ಗದ ಬಿಂಬವೇ ಆದ್ದರಿಂದ ಈ ಎಲ್ಲಾ ಸಂವಿಧಾನಾತ್ಮಕ ಹಕ್ಕುಗಳ ಹೆಸರಿನ ಪ್ರತಿರೋಧ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಅನ್ಯಾಯದ ಒಳಗಿನ ನ್ಯಾಯಕ್ಕಾಗಿರುವ ಅನ್ಯಾಯದ ಕೂಗಿನ ನ್ಯಾಯದ ಪ್ರಶ್ನೆ.<br />ಇಂಥ ಚರ್ಚೆಗಳಿಗೆ ಇನ್ನೊಂದು ರಾಜಕೀಯ ತಂತ್ರಗಾರಿಕೆಯ ಆಯಾಮವೂ ಇದೆ. ಸಂಘಪರಿವಾರದ ಸರ್ಕಾರ ಒಂದೊಂದು ಜನವಿರೋಧೀ ಮಸೂದೆಯನ್ನು ಸಾಂವಿಧಾನಿಕ ಸಮ್ಮತಿಗೆ ಒಳಪಡಿಸುವಾಗಲೂ ಒಂದೊಂದು ಅರಾಜಕೀಯ ವಿವಾದದಲ್ಲಿ ಮಧ್ಯಮವರ್ಗೀಯ ಚಿಂತಕರನ್ನು ತೊಡಗಿಸುತ್ತಾ ಬಂದಿದೆ. ಆಟವನ್ನು ಬದಲಿಸುವ ಮೊದಲು ಆಟದ ನಿಯಮಗಳನ್ನು ಬದಲಿಸುವುದೇ ಮಸೂದೆ ಮಂಡನೆ ಎಂಬುದನ್ನು ನೀವು ಬಲ್ಲಿರಿ. ಶ್ರಮಿಕರು, ರೈತರು, ಮಹಿಳೆಯರು ಮತ್ತು ದಲಿತ ವಿರೋಧೀ, ಒಂದೇ ಮಾತಿನಲ್ಲಿ ಬಂಡವಳಿಗರ ಪರವಾದ ವ್ಯವಸ್ಥೆಯನ್ನು ಭದ್ರಪಡಿಸುವ ಈ ರಾಜಕೀಯದಲ್ಲಿ ಹೆಚ್ಚು ಹೆಚ್ಚು ಸಾಂಸ್ಕೃತಿಕ, ನೈತಿಕ ವಿವಾದಗಳನ್ನು ಎಬ್ಬಿಸಿದಷ್ಟೂ , ಬುದ್ಧಿಜೀವಿಗಳನ್ನು ಅವುಗಳಲ್ಲಿ ತೊಡಗಿಸಿದಷ್ಟೂ ಆಳುವವರ್ಗಗಳ ಆಡಳಿತ ಸುಗಮವಾಗುತ್ತದೆ. ಜನಸಮುದಾಯದ ಗಮನ ದೈನಂದಿನ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳತ್ತದೆ. ಸಾಕಷ್ಟು ವಿರಾಮವಿದ್ದು ನಿರ್ಗಿಷ್ಟವಾಗಿ ಶ್ರಮಿಕರ ಹಿತಕಾಯುವಂಥ ಚಿಂತನೆಗಳಲ್ಲಿ ತೊಡಗಿಕೊಳ್ಳಬೇಕಿದ್ದರೆ ಯಾವುದೇ ಪ್ರಶ್ನೆ-ವಿವಾದವನ್ನು ಸಮಕಾಲೀನ ಸಮಾಜದ ಉತ್ಪಾದನಾ ಸಂಬಂಧಗಳು ಮತ್ತು ವರ್ಗಹಿತಾಸಕ್ತಿಗಳೊಂದಿಗೆ ನೋಡುವುದು ಅತ್ಯಗತ್ಯ. ಆಗ ದಾರಿ ತಪ್ಪುವುದು ತಪ್ಪಬಹುದು.<br />-ವಿ.ಎನ್.ಲಕ್ಷ್ಮೀನಾರಾಯಣ, V.N.Laxminarayanahttps://www.blogger.com/profile/12312000083238093999noreply@blogger.com